ಈ ‘ಪೈಪೋಟಿ’ ಜೋರಾಗೆ ನಡೀತಾ ಇದೆ. ಇದು ಅಂತಿಂತ ಪೈಪೋಟಿ ಅಲ್ಲ. ಈಗಾಗಲೇ ಮಾತಿನ ಭಾಗ ಹಾಗೂ ಮೂರು ಹಾಡುಗಳ ಚಿತ್ರೀಕರಣ ಮುಗಿಸಿ ಇನ್ನೇರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿಸಿಕೊಂಡಿದ್ದಾರೆ.
ಜಗ್ಗೇಶ್ ಪುತ್ರ ಗುರುರಾಜ್ ಇತ್ತೀಚಿಗೆ ನಿಜ ಜೀವನದಲ್ಲಿ ಮದುವೆ ಆಗಿ ಅಭಿನಯಿಸುತ್ತಿರುವ ಚಿತ್ರ ನಿರಂಜನ್ ಶೆಟ್ಟಿ ಜೊತೆ ಪೈಪೋಟಿ ಚಿತ್ರದಲ್ಲಿ ಮಾಡಲಿದ್ದಾರೆ. ಈ ಚಿತ್ರದಲ್ಲಿ ಪೂಜಶ್ರೀ ಒಬ್ಬರೇ ನಾಯಕಿ.
‘ಸ್ನೇಹಿತರು’ ಸಿನೆಮದಿಂದ ನಿರ್ದೇಶಕರ ಪಟ್ಟಿಯಲ್ಲಿ ಪೈಪೋಟಿ ಕೊಡುತ್ತಿರುವ ರಾಂನಾರಾಯಣ್ ಈ ಚಿತ್ರದ ನಿರ್ದೇಶಕರು.ಗಣೇಶ್ ನಾರಾಯಣ್ ಅವರು ಈ ಚಿತ್ರದ ಸಂಗೀತ ನಿರ್ದೇಶಕರು. ಬೆಳಗಾವಿಯ ಲಕ್ಷ ಈ ಚಿತ್ರದ ನಿರ್ಮಾಪಕರು.
‘ಪೈಪೋಟಿ’ ಅಡಿಯಲ್ಲಿ ‘ತ್ಯಾಗ ನಿಜ ಧರ್ಮ’ ಎನ್ನುತ್ತಾರೆ ನಿರ್ದೇಶಕರು. ಅನಂತ್ ಅರಸ್ ಅವರು ಛಾಯಾಗ್ರಾಹಕರು, ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಮೋಹನ್ ಜುನೇಜ, ಲಯೆನ್ದ್ರ ಇದ್ದಾರೆ.